ಗುಂಡಿಗೆಯೊಳಗೊಂದು ಬಂಡಿ ನೆತ್ತರು
ಕೊತಕೊತನೆ ಕುದಿಯುತಿರಲು
ಆ ಕ್ರೌರ್ಯದ ಗೆರೆ ದಾಟಿ
ನಡೆಯಬಹುದೇನೋ ಮತ್ತೊಮ್ಮೆ
ಮಹಾಭಾರತ ...?
ಮದ, ಮತ್ಸರ, ಕಾಮ, ಕ್ರೋಧ
ಅಂತರಂಗದಲ್ಲಿ ಧಗಧಗಿಸುತಿರಲು
ಈ ರಣರಂಗದಲಿ ಖಡ್ಗವಿಡಿದು ನಿಲ್ಲಲು
ಎಂಟೆದೆಯೇನೂ ಬೇಕಾಗಿಲ್ಲ ..
ಪ್ರೀತಿ , ಮಮತೆ, ಸ್ನೇಹ , ತ್ಯಾಗ
ಎಲ್ಲವನ್ನೂ ಗೆಲ್ಲಬಹುದು
ಹೃದಯದ ತುಂಬಾ ಪ್ರೀತಿ ಇರಲು
ಮಾಡಬೇಕಾಗಿಲ್ಲ ಯಾವ ಯುದ್ಧವನ್ನು...!
No comments:
Post a Comment